ರಾಯಚೂರು: ಮಗನನ್ನೇ ಹೆತ್ತ ತಂದೆ ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಸಿಂಧನೂರು ತಾಲೂಕಿನ ಕಲ್ಮಂಗಿಯಲ್ಲಿ ನಡೆದಿದೆ. 4 ವರ್ಷದ ಮಹೇಶ ತಂದೆಯಿಂದ ಕೊಲೆಯಾದ ದುರ್ದೈವಿಯಾಗಿದ್ದು, ಇವನ ತಂದೆ ಯಲ್ಲಪ್ಪ ಕೊಲೆ ಮಾಡಿರುವ ಆರೋಪಿ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಯಲಪ್ಪನ ಪತ್ನಿ ಪಾರ್ವತಿ ತವರು ಮನೆ ಹೋಗಿದ್ದಳು. ಹೆಂಡತಿಯ ಊರಿಗೆ ಹೋಗಿ ಮಗನನ್ನ ಕಿಡ್ನಾಪ್ ಮಾಡಿಕೊಂಡು ಬಂದಿದ್ದ ಯಲ್ಲಪ್ಪ ತನ್ನ ಮಗುವನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಫೆಬ್ರವರಿ 1ನೇ ತಾರಿಖಿನಂದು ಮಗುವನ್ನ ಕಿಡ್ನಾಪ್ ಮಾಡಿಕೊಂಡು ಬಂದಿದ್ದು, ಮಗು ಕಿಡ್ನಾಪ್ ಆಗಿದ್ದ ಬಗ್ಗೆ ತುರ್ವಿಹಾಳ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಮಗುವನ್ನು ಕತ್ತು ಹಿಸುಕಿ ಜಮೀನಿನಲ್ಲಿ ಎಸೆಯಲಾಗಿದೆ. ಘಟನೆ ಕುರಿತಂತೆ ತುರುವಿಹಾಳ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಮಗನನ್ನ ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಮಗನನ್ನೇ ಕ್ರೂರವಾಗಿ ಕೊಲೆ ಮಾಡಿದ ಪಾಪಿ ತಂದೆ
previous post