ಮಂಗಳೂರು : ಮದುವೆಯ ಸಂಭ್ರಮದಲ್ಲಿದ್ದ ನವವಧು ಮದುವೆಯಾದ ಮೊದಲ ರಾತ್ರಿಯೇ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಗರದ ಅಡ್ಯಾರ್ ಕಣ್ಣೂರಿನಲ್ಲಿ ನಡೆದಿದೆ. ಅಡ್ಯಾರ್ ಕಣ್ಣೂರು ಬಿರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆ ಹೆಚ್ಕೆ ಅಬ್ದುಲ್ ಕರೀಂ ಹಾಜಿ ಎಂಬುವರ ಪುತ್ರಿ ಲೈಲಾ ಅಫಿಯಾ(24) ಮೃತ ದುರ್ದೈವಿ. ಅಫಿಯಾ ಅವರ ಮದುವೆ ನಿನ್ನೆ ಮುಬಾರಕ್ ಎಂಬುವರ ಜೊತೆ ನಡೆದಿತ್ತು. ರಾತ್ರಿ ವರ ಮುಬಾರಕ್ ಅತ್ತೆ ಮನೆಗೆ ಬಂದಿದ್ದರು. ನವಜೋಡಿಯೂ ಸಂಭ್ರದಲ್ಲಿತ್ತು. ಆದರೆ, ಏಕಾಏಕಿ ನಿನ್ನೆ ತಡರಾತ್ರಿ ಲೈಲಾ ಅಫಿಯಾ ಅವರಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ.
ಮದುವೆಯಾದ ಮೊದಲ ರಾತ್ರಿ ಹೃದಯಾಘಾತದಿಂದ ವಧು ಸಾವು.. ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂಚಕ
previous post